21 names of lord shiva

March 17, 2022

 21 names of lord shiva

21 names of lord shiva

* ಶಿವನ 21 ಹೆಸರುಗಳು ಮತ್ತು ಅರ್ಥ*.


*ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ*. 


ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಆದ್ದರಿಂದ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ.  


*ಸೋಮವಾರದಂದು* ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ 


*ಈ ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ 


1. *ಶಿವ* : ಮಂಗಳಕರನಾದುದರಿಂದ ಈತ ‘ಶಿವ’. ಶಿವ ಎಂಬ ಪದದ ಅರ್ಥವೇ ‘ಮಂಗಳ’.

2. *ವಾಮದೇವ* : ವಾಮ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮ ದೇವ’ ಎಂದು ಸ್ತುತಿಸಲಾಗಿದೆ.

3. *ಸುಂದರೇಶ್ವರ*: ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತೀದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ. ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ *ಸುಂದರೇಶ್ವರನ* ರೂಪ ತಾಳುತ್ತಾನೆ.

4. *ವೃಷಭಧ್ವಜ*: ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ಶಿವನು

 ‘ವೃಷಭಧ್ವಜ’’

5. *ಆಶುತೋಶ* : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ಆಶುತೋಷ

6. *ಗಂಗಾಧರ* : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನು ‘ ಗಂಗಾಧರ’

7. *ಪಿನಾಕಿ* : ಪಿನಾಕ ಧನಸ್ಸನ್ನು ಧರಿಸಿರುವುದರಿಂದ ಈ ಹೆಸರು.

8. *ವಿಷಕಂಠ* : ಸಮುದ್ರಮಥನ ಸಂದರ್ಭದಲ್ಲಿ ಹಾಲಾಹಲ ವಿಷವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.

9. ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.

10. *ನಟರಾಜ* : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತ ನಟರಾಜ

11. *ಸದ ಶಿವ* : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ, “ಸದಾಶಿವ”

12. *ನಾಗಾಭರಣ* : ನಾಗ (ಸರ್ಪವನ್ನು)ನನ್ನು ಆಭರಣವಾಗಿ ಧರಿಸಿರುವುದರಿಂದ “ನಾಗಾಭರಣ.

13. *ತ್ರಿಪುರಾರಿ* : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”

14. *ಮೃತ್ಯುಂಜಯ* : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ “ಮೃತ್ಯುಂಜಯ”

15. *ಧೂರ್ಜಟಿ* : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ “ಧೂರ್ಜಟಿ”

ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.

16. *ಮಹಾದೇವ* : ದೇವತೆಗಳ ದೇವನಾದ್ದರಿಂದ ‘ಮಹಾದೇವ’

17. ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ

18. *ಶಂಕರ* : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ

19. *ಆದಿಯೋಗಿ* : ಮಹಾ ತಾಪಸಿಯಾದ ಶಿವ ಯೋಗಿಗಳ ಮಹಾದೇವ. ಯೋಗಿಗಳ ಪರಮಗುರು. ಆದ್ದರಿಂದ ಈ ಹೆಸರು

20. ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಈ ಹೆಸರು.

21. ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ.



🙏🙏🕉🕉🕉🕉️🕉️🕉️🙏🙏


🙏ಓಂ ನಮಃ ಶಿವಾಯ-ಹರಿ ಓಂ 🙏

Ganagapur History In Kannada, ganagapur dattatreya temple information in kannada

January 04, 2022

 Ganagapur History In Kannada,  ganagapur dattatreya temple information in kannada

Ganagapur History In Kannada | ganagapur dattatreya temple information in kannada



*ದತ್ತ ಗುರುವಿನ ದಿವ್ಯ ಕ್ಷೇತ್ರ ಶ್ರೀ ಗಾಣಗಪುರ.*


ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. *ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.*   


ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ *ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ.*                  


*ಶ್ರೀಗುರುಚರಿತ್ರೆ ಎಂಬ* ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸ ಲಾಗಿದೆ.


*ಪಾತಿವ್ರತ್ಯದ ಶಕ್ತಿಯಿಂದ ತ್ರಿಮೂರ್ತಿಗಳನ್ನು ತನ್ನ ಮಕ್ಕಳನ್ನಾಗಿ ಮಾಡಿದ ಅನಸೂಯಾ ಕಥೆ ನಮಗೆ ತಿಳಿದದ್ದೇ.*          


*ತ್ರಿಮೂರ್ತಿಗಳು ಒಂದೇ ಅವತಾರದಲ್ಲಿ ನೆಲೆಸಿದ್ದು* ದೇವಲಗಾಣಗಾಪುರದಲ್ಲಿ . 


*ಸೃಷ್ಟಿಕರ್ತ, ಸೃಷ್ಟಿರಕ್ಷಕ, ಲಯಕರ್ತ ಈ ಮೂವರು ಒಂದೇ ರೂಪದಲ್ಲಿ ನೆಲೆಸಿರುವ*               


ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರ       


*ಪವಿತ್ರ ತಾಣ. ಬ್ರಹ್ಮ, ವಿಷ್ಣು, ಮಹೇಶ್ವರರು ದತ್ತಾತ್ರೇಯ ಎಂಬ ನಾಮದಿಂದ ಅವತರಿಸಿದ ಪಾವನಕ್ಷೇತ್ರ ಇದಾಗಿದೆ.*


 ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ *ಬಂದು ಸುಮಾರು 23 ವರ್ಷ ನೆಲೆಸಿದ್ದರು.* ಈ ಅವಧಿಯಲ್ಲಿ ಇಲ್ಲಿ ದತ್ತಸಂಪ್ರದಾಯವನ್ನನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿರತೊಡಗಿ ಮುಂದೆ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವಾರದಲ್ಲಿ ಮಹಾದೇವ - ಪಾರ್ವತಿಯರ ಮೂರ್ತಿ, *ಅಶ್ವತ್ಥವೃಕ್ಷದ ಪೊದರಿನಲ್ಲಿ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಲಸೀ ವೃಂದಾವನಗಳು ಗೋಚರವಾಗುತ್ತವೆ.*           


ಈ ಮಠದಲ್ಲಿರುವ ಶ್ರೀಗುರುಗಳ *ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ.*      


ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ.     


*ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರ ಗಳಿವೆ*. ಪಶ್ಚಿಮದ ಮಹಾದ್ವಾರ ವಿಶಾಲವಾಗಿದ್ದು ಅದರ ಮಹಡಿಯಲ್ಲಿ ನಗಾರಖಾನೆ (ದೇವಸ್ಥಾನದ ನಗಾರಿಗಳನ್ನು ಬಾರಿಸುವ ಜಾಗ) ಇದೆ. ಭಕ್ತಾದಿಗಳು ಕೂಡಲು ಯೋಗ್ಯವಾದ ಏಳು ಜಗಲಿಗಳಿವೆ. 


*ಗರ್ಭಗುಡಿಯಲ್ಲಿನ ಪಾದುಕೆಗಳ ದರ್ಶನ ಮಾಡಬೇಕಾದರೆ* ಉಡುಪಿಯಲ್ಲಿರುವಂತೆ ಒಂದು ಬೆಳ್ಳಿಯ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಇಲ್ಲಿ ನಿತ್ಯೋಪಾಸನೆ ಬೆಳಗ್ಗಿನಿಂದ ಪ್ರಾರಂಭವಾಗುತ್ತದೆ. ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ. *ಕೇಸರಿ ಮತ್ತು ಅಷ್ಟಗಂಧಗಳನ್ನು ಲೇಪಿಸುತ್ತಾರೆ.*                   


ಪ್ರತಿ *ಗುರುವಾರ ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.*


*ಇಂದಿಗೂ ಗಾಣಗಾಪುರದಲ್ಲಿ ದತ್ತಮಹಾರಾಜರು ಶ್ರೀಪಾದರು ಹಾಗೂ ನರಸಿಂಹ ಸರಸ್ವತಿಗಳು ಮೂರು ಅವತಾರಗಳಲ್ಲಿ ನೆಲೆಸಿ ಭಕ್ತರನ್ನು ಉದ್ಧರಿಸುತ್ತಿದ್ದಾರೆ.*         


*ದತ್ತನ ಪಾದುಕಾಪೂಜೆ ಇಲ್ಲಿನ ವಿಶೇಷ.* 


*ದತ್ತಜಯಂತಿ, ನರಸಿಂಹ ಸರಸ್ವತಿ ಜಯಂತಿ ಆಚರಿಸಲಾಗುತ್ತದೆ.* 


ಮಹಾರಾಷ್ಟ್ರ *ಭಕ್ತರು ದತ್ತನ ದರ್ಶನಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ.*


 ಕಲಬುರಗಿಯಿಂದ ಕೇವಲ 35-40 ಕಿಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಬಸ್ ಮತ್ತು ರೈಲು ಸಂಚಾರ ವ್ಯವಸ್ಥೆ ಇದೆ.

ಊರಿನಿಂದ 1.6 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಇಲ್ಲಿ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಹೀಗೆ ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. 


*ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ.* ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, *ಪಾಪವಿನಾಶಿತೀರ್ಥ,* ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ *ಎಂಟು ತೀರ್ಥಗಳಿವೆ.* 


ಇಲ್ಲಿನ *ತೀರ್ಥಗಳಲ್ಲಿ ಸ್ನಾನಮಾಡಿದರೆ* ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.


ಗಾಣಗಾಪುರದ ಉತ್ಸವ ಸಮಾರಂಭಗಳಲ್ಲಿ 


*ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ* - ಇವೆರಡು ವಿಶೇಷ ಮಹತ್ತ್ವದವು.      


*ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ.*


ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ *ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ*


*ಶ್ರೀಗುರುಚರಿತ್ರೆ* ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. 


*ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ* ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. 


*ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ*. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. *ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ.* 


ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ *ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ* ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ.


*ತಲುಪುವ ಮಾರ್ಗ*👇





*ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್​ಗಳಿಂದ* ರೈಲಿನಲ್ಲಿ ಆಗಮಿಸುವ ಭಕ್ತರು ಕಲಬುರಗಿ ರೈಲು ನಿಲ್ದಾಣದಲ್ಲಿಳಿದು ಬಸ್ ಮೂಲಕ ನೇರವಾಗಿ ದೇವಲಗಾಣಗಾಪುರಕ್ಕೆ ತೆರಳಬಹುದು.        


*ಇಲ್ಲವಾದರೆ ಸ್ಟೇಷನ್ ಗಾಣಗಾಪುರದ ರೈಲು ನಿಲ್ದಾಣದಲ್ಲಿಳಿದು 15 ಕಿ.ಮೀ. ಕ್ರಮಿಸಿ ದೇವಲಗಾಣಗಾಪುರಕ್ಕೆ ತಲುಪಬೇಕಾಗುತ್ತದೆ.* 


*ಮುಂಬೈ-ಚೆನ್ನೈ ಮುಖ್ಯ ರೈಲು ಮಾರ್ಗದಲ್ಲಿ ಸ್ಟೇಷನ್ ಗಾಣಗಾಪುರ ನಿಲ್ದಾಣವಿದೆ.* ಅಫಜಲಪುರ ಮಾರ್ಗವಾಗಿಯೂ ಈ ಕ್ಷೇತ್ರಕ್ಕೆ ತೆರಳಬಹುದಾಗಿದೆ.

Needu Shiva needadiru Shiva Lyrics in Kannada | ನೀಡು ಶಿವ ನೀಡದಿರು ಶಿವ.

December 29, 2021

 Needu Shiva needadiru Shiva Lyrics in Kannada | ನೀಡು ಶಿವ ನೀಡದಿರು ಶಿವ.

Needu Shiva needadiru Shiva Lyrics in Kannada | ನೀಡು ಶಿವ ನೀಡದಿರು ಶಿವ.



ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ ||ಪ||


ನಾನೇಕೆ ಅಂಜಲಿ ನೀ ನನ್ನ ಅಂಬಲಿ |

ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ ||ಅ.ಪ||

 

ಶೃಂಗಾರ ಕೃತಕ ಬಂಗಾರ ಕ್ಷಣಿಕ

ಬಾಳಲ್ಲಿ ಬಡಿವಾರವೇಕೆ 

ನೀನಿತ್ತ ಕಾಯ ನಿನ ಶೈಲಿ ಮಾಯ

ಆಗೋದು ಹೋಗೋದು ನಾ ಕಾಣೆನೆ ||1||

 

ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ 

ನಾನಂತೂ ನಿನ್ನನ್ನಲಾರೆ

ಸಾರಂಗ ಮನಕೆನೂರಾರು ಬಯಕೆ

ಮುಂದಿಟ್ಟುಉಣಿಸೋದು ನಾ ಕಾಣೆನೆ ||2||

Dayamaya Guru karunamaya lyrics in Kannada | Dayamaya Guru karunamaya lyrics in English

December 27, 2021

 Dayamaya Guru karunamaya lyrics in Kannada | Dayamaya Guru karunamaya lyrics in English


ಪರಮಹಂಸ ಸದ್ಗುರು ಶ್ರೀ ಸತ್ ಉಪಾಸಿ ರಚಿಸಿರುವ,

ಘನಾನುಭವಸಾರ ಗ್ರಂಥ.


Kannada Lyrics


ದಯಾಮಯ ಗುರು ಕರುಣಾಮಯ |

ಕರುಣಾಮಯ ಗುರು ಪ್ರೇಮಾಮಯ || ||


ಪರಮ ಸ್ವರೂಪನು ತಾನಂತೆ |

ಅರಿಯಲು ಭಕ್ತಿಯು ಬೇಕಂತೆ |

ಒಲಿದರೆ ಪಾವನನವನಂತೆ

ಸಂಸಾರದ ಭಯ ಅವಗಿಲ್ಲಂತೆ || ೧ ||


ಗುರುವಿಗೆ ಸಮನಾರಿಲ್ಲಂತೆ

ಗುರು ಪಾದವ ನಂಬಿರಬೇಕಂತೆ |

ದೃಢತೆಯು ತನಗಿರಬೇಕಂತೆ |

ಧೃತಿಗೆಡದೆ ತಾನಿರಬೇಕಂತೆ || ೨ ||


ಪಾಪಿಗೆ ತಾ ಬಹುದೂರಂತೆ |

ದುರ್ಮಾರ್ಗಿಗೆ ಕಾಣನು ಗುರುವಂತೆ |

ಕುಟಿಲರಿಗೋಲಿಯನು ತಾನಂತೆ

ಕುಹಕಿಗೆ ಎಂದೂ ಸಿಗನಂತೆ || ೩ ||


ಜ್ಞಾನವೆ ತನ್ನುಸಿರಾಗಿಹುದು

ಉಸುರಲು ಪಾವನವಾಗುವುದು |

ಸೇವೆಯೆ ಸಾಧನೆಯಾಗಿಹುದು |

ಗುರು ಕರುಣೆಯೆ ಧನ್ಯನ ಮಾಡುವುದು || ೪ ||


ಶರಣಾಗತರನು ಕಾಯುವನು |

ಪರಮಾನಂದವ ನುಣಿಸುವನು

ನಿಜ ಭಕ್ತಿಗೆ ಗುರು ತಲೆ ಬಾಗುವನು |

ಭವ ಜಲಧಿಯ ದಾಂಟಿಸಿ ಕಾಯುವನು || ೫ ||


ನಾ ನೀಯೆಂಬುದನಳಿಯೆಂದಾ ||

ಮದ ಮತ್ಸರಗಳ ನೀ ಸುಡು ಎಂದಾ ||

ದುರುಳರಿಗೆ ನಾ ದೂರೆಂದಾ

ದುರಹಂಕಾರಿಗೆ ತಾ ಸಿಗನೆಂದಾ || ೬ ||


ಸದ್ದುರು ದೊರೆವುದು ದುರ್ಲಭವು ||

ದೊರೆತರೆ ಜನ್ಮವು ಪಾವನವು |

ಸಾರುತಲಿರುವವು ಶಾಸ್ತ್ರಗಳು |

ಗುರು ಪರಮೇಶ್ವರನಹುದೆಂದೂ || ೭ ||


ಅಚ್ಯುತ ಅನಂತ ಶ್ರೀ ಗುರುವೆ |

ಚಿನ್ಮಯ ಚಿದ್ಘನ ನೀ ಗುರುವೆ ||

ಗುರು ಕನ್ನೇಶ್ವರ ಬಾ ಗುರುವೆ ||

ಕರ ಜೋಡಿಸಿ ನಾ ಶಿರ ಬಾಗಿರುವೆ | ೮ ||


YouTube Video👇




English Lyrics


Dayamaya guru karunamaya |

Karunamaya guru premamaya || P ||


Parama swaroopanu tanante |

Ariyalu bhaktiyu Balance ||

Olidare pavananavanante|

Samsarada bhaya avagillante||1||


Guruvige samanarillante |

Gurupadava nambirabekante ||

Drudhateyu tanagirabekante |

Drutigedade tanirabekante||2||


Papige ta bahu durante|

Durmargige kananu guruvante||

Kutilarigoliyanu tenants|

Kuhakige endu siganante||3||


Jnanave tannusiraguvudu|

Usiralu pavana vaguvudu||

Seveye sadhane yagihudu|

Guru karuneye dhanyana maduvudu||4||


Sharanagataranu kayuvanu|

Paramanandavanunisuvanu||

Nija bhaktige guru tale baguvanu|

Bhava jaladhiya dantisi kayuvanu||5||


Naa Nee Embudanalienda|

Mada matsaragala nee sudu enda||

Durularige Naa durenda||

Durahankarige ta siganenda||6||


Sadguru dorevudu durlabhavu|

Doretare Janmavu Pavanavu||

Sarutaliruvavu Shastragalu|

Guru parameshvaranu ahudendu||7||


Achyuta ananta Sri guruve|

Chinmaya chidhghana nee guruve||

Guru Kanneshvara ba Guruve|

Kara jodisi Na shira bagiruve||8||





Dodderi appaji speech (English) | Soham | Sri sat upasi | Dodderi Appa D...

October 24, 2021

Nine Nanna Guruvu | Dodderi Appaji Songs | Bhajan Music | Sri Sat upasi ...

July 20, 2021

Bahu punyadinda guru | ಬಹು ಪುಣ್ಯದಿಂದ ಗುರುದೇವ | Dodderi Appaji Songs | ಘನ...

March 28, 2021
Bahu punyadinda guru | ಬಹು ಪುಣ್ಯದಿಂದ ಗುರುದೇವ | Dodderi Appaji Songs

Dattatreya Shodasha Mantram | Datta Shodasha Mantra | Shodasha Avatar | ...

March 20, 2021

Mukti Marga | ಮನಸ್ಸನ್ನು ನಿಗ್ರಹಿಸುವವನು ಜಗತ್ತನ್ನೇ ಗೆಲ್ಲುವನು | ಮುಕ್ತಿ ಮಾರ್ಗ...

February 20, 2021